ಬೆಳಗದಿರುವುದೇ

ಪ್ರಿಯ ಸಖಿ,
ನನ್ನಿಂದೇನು ಸಾಧ್ಯ ? “ನಾನು ಅತ್ಯಂತ ನಿಕೃಷ್ಟ ಜೀವಿ” ‘ನನ್ನಿಂದ ಯಾರಿಗೂ ಏನೂ ಪ್ರಯೋಜನವಿಲ್ಲ’ ಎಂದು ಹಲುಬುವ ನಿರಾಶಾವಾದಿಗಳನ್ನು ನಮ್ಮ ಸುತ್ತಮುತ್ತ ಕಾಣುತ್ತಲೇ ಇರುತ್ತೇವೆ. ಇಂತಹವರನ್ನು ಕಂಡೇ ಇರಬೇಕು ಕವಿ ಎಸ್. ವಿ. ಪರಮೇಶ್ವರಭಟ್ಟರು ತಮ್ಮ ಕವನವೊಂದರಲ್ಲಿ ಹೀಗೆ ಹೇಳಿದ್ದಾರೆ.
ವಿಶ್ವವ್ಯಾಪಿ ತಮದ
ಮುಂದೆ ತನ್ನ ದೀಪವೆ?
ತನ್ನ ದಿಟ್ಪವೊಂದರಿಂದೆ
ಕತ್ತಲಳಿವದೇ?
ಎನುವ ಶಂಕೆ ಚುಕ್ಕಿಗೇಕೆ?
ಏಕೆ ಹೆದರಿಕೆ?
ಬೆಳಗಲೆಂದು ಹುಟ್ಟಿದಂದು
ಬೆಳಗದಿರುವುದೇ?
ಎಷ್ಟೊಂದು ಸ್ಫೂರ್ತಿದಾಯಕ ಕವನದ ಸಾಲುಗಳಲ್ಲವೇ ಸಖಿ? ದೊಡ್ಡ ಆಕಾಶದಲ್ಲಿ ಪುಟ್ಟ ತಾರೆಯೊಂದು ಇಷ್ಟೊಂದು ಕತ್ತಲಿನಲ್ಲಿ ತನ್ನ ಬೆಳಕು ಯಾವ ಮೂಲೆಗೆ? ತನ್ನ ದೀಪವೊಂದರಿಂದಲೇ ಕತ್ತಲು ಅಳಿಯುವುದೇ? ಎಂದು ಹೆದರುತ್ತದೆ. ಆದರೆ ಕತ್ತಲು ಎಷ್ಟೇ ಇರಲಿ ಬೆಳಗಲೆಂದೇ ಅದು ಹುಟ್ಟಿರುವದು.

ಹಾಗೇ ಮನುಷ್ಯನೂ ಕೂಡ ಪ್ರತಿಯೊಬ್ಬನಿಗೂ ಅವನವನದೇ ಆದ ವಿಶಿಷ್ಟತೆ, ಬೆಳಕು ಇದ್ದೇ ಇರುತ್ತದೆ. ಅದನ್ನವನು ಕಂಡುಕೊಂಡು ಬಾಳಬೇಕು. ಬೆಳಕು ನೀಡಬೇಕು. ಪ್ರತಿಯೊಬ್ಬ ಜೀವಿಯೂ ಇಲ್ಲಿ ಜನ್ಮ ತಳೆದು ಬಂದ ಮೇಲೆ ಅವನವನ ಕರ್ತವ್ಯವನ್ನು ಅವನು ನಿಭಾಯಿಸಲೇಬೇಕು. ಕಷ್ಟವೆಂದು ಸುಮ್ಮನೆ ಕೂರುವಂತಿಲ್ಲ. ‘ತನ್ನಿಂದ ಏನೂ ಸಾಧ್ಯವಿಲ್ಲ’ ಎಂಬ ನಿರಭಿಮಾನವೂ ಬೇಡ. ಹಾಗೇ ‘ತನ್ನಿಂದಲೇ ಪ್ರಪಂಚವೆಲ್ಲಾ ಎಂಬ ದುರಭಿಮಾನವೂ ಬೇಡ. ತನ್ನಿಂದ ಏನಾದರೂ ಸಾಧಿಸಲು ಸಾಧ್ಯ ಎಂದು ವ್ಯಕ್ತಿ ಮನಸ್ಸು ಮಾಡಿದನೆಂದರೆ ಅರ್ಧ ಕೆಲಸ ಆದಂತೆಯೇ ಎನ್ನುತ್ತಾರೆ ಹಿರಿಯರು. ಅದಕ್ಕೆಂದೇ
ಕವಿ ಶೇಕ್ಸ್‍ಪಿಯರ್ ಹೀಗೆ ಹೇಳುತ್ತಾನೆ. ‘Where there is will there is a way’ ಎಲ್ಲಿ ಗುರಿ ಇದೆಯೋ ಅಲ್ಲಿ ದಾರಿಯೂ ಇದ್ದೇ ಇದೆ ಎಂದು.

ಪ್ರಿಯ ಸಖಿ, ಸೂರ್ಯನಂತೆ ಜಗವನ್ನೇ ಬೆಳಗಬಲ್ಲೆನೆಂಬ ಹುಂಬತನವಿಲ್ಲದಿದ್ದರೂ ಚುಕ್ಕಿಯಾಗಿಯೇ ಬೆಳಗಿ ನನ್ನ ಸುತ್ತಮುತ್ತಲಾದರೂ ಸರಿ ಬೆಳಕು ನೀಡುವೆನೆಂಬ ಆತ್ಮವಿಶ್ವಾಸ, ಆಶಾವಾದ, ನಂಬಿಕೆ ನಮ್ಮದಾದರೆ ಅಷ್ಟೇ ಸಾಕು. ದಾರಿ ಹೇಗೋ ತಾನೇ ತೆರೆದುಕೊಳ್ಳುತ್ತಾ ಸಾಗುತ್ತದೆ ! ನೀನೇನೆನ್ನುತ್ತೀ ಸಖಿ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಜ್ಜಿ ನಂಗೆ ಇಷ್ಟ
Next post ಸೌಂದರ್ಯಕ್ಕೆ

ಸಣ್ಣ ಕತೆ

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

cheap jordans|wholesale air max|wholesale jordans|wholesale jewelry|wholesale jerseys